ಅತಿ ದೊಡ್ಡ ದೇವಾಲಯ - ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು
ಅತಿ ದೊಡ್ಡ ಮೃಗಾಲಯ - ಜಯಚಾಮರಾಜೇಂದ್ರ ಮೃಗಾಲಯ, ಮೈಸೂರು
ಅತಿ ದೊಡ್ಡ ವಿಗ್ರಹ - ಗೊಮ್ಮಟೇಶ್ವರ, ಶ್ರವಣಬೆಳಗೊಳ
ಅತಿ ದೊಡ್ಡ ಗುಮ್ಮಟ - ಗೋಲಗುಮ್ಮಟ, ವಿಜಾಪುರ
ಅತಿ ದೊಡ್ಡ ಪಕ್ಷಿಧಾಮ - ರಂಗನತಿಟ್ಟು, ಮಂಡ್ಯ
ಅತಿ ದೊಡ್ಡ ಬಂದರು - ನವಮಂಗಳೂರು ಬಂದರು, ಮಂಗಳೂರು
ಅತಿ ದೊಡ್ಡ ಹೊರಾಂಗಣ ಕ್ರೀಡಾಂಗಣ - ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ಅತಿ ದೊಡ್ಡ ಒಳಾಂಗಣ ಕ್ರೀಡಾಂಗಣ - ಕಂಠೀರವ ಕ್ರೀಡಾಂಗಣ, ಬೆಂಗಳೂರು
ಅತಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ - ಶರಾವತಿ
ಅತಿ ದೊಡ್ಡ ನೀರಾವರಿ ಯೋಜನೆ ಹೊಂದಿರುವ ನದಿ - ಕಾವೇರಿ
ಅತಿ ದೊಡ್ಡ ಪುಸ್ತಕ ಮಳಿಗೆ - ಸಪ್ನಾ ಬುಕ್ ಸ್ಟಾಲ್, ಬೆಂಗಳೂರು
ಅತಿ ದೊಡ್ಡ ಕೆರೆ - ಶಾಂತಿಸಾಗರ (ಸೂಳೆಕೆರೆ), ಚನ್ನಗಿರಿ
(ದ.ಭಾರತದ 2ನೇ ಅತಿ ದೊಡ್ಡ ಕೆರೆ)
ಅತಿ ದೊಡ್ಡ ಆಲದಮರವಿರುವ ಊರು - ರಾಮೋಹಳ್ಳಿ, ಬೆಂಗಳೂರು
ಅತಿ ದೊಡ್ಡ ಗ್ರಾಮಪಂಚಾಯಿತಿ - ಹಾರೂಗೇರಿ, ರಾಯಬಾಗ ವಿ.ಸ.ಕ್ಷೇತ್ರ.
ಅತಿ ದೊಡ್ಡ ವಿಧಾನಸಭಾ ಕ್ಷೇತ್ರ - ........., ಬೆಂಗಳೂರು
ಅತಿ ದೊಡ್ಡ ಲೋಕಸಭಾ ಕ್ಷೇತ್ರ - ಬೆಂಗಳೂರು ಉತ್ತರ
(ದೇಶದಲ್ಲಿ 2ನೇ ಅತಿ ದೊಡ್ಡ)
ಅತಿ ಹೆಚ್ಚು ಮತದಾರರನ್ನು ಹೊಂದಿರುವ ಜಿಲ್ಲೆ - ಬೃ.ಬೆಂ.ಮ.ಪಾ.
(ಚುನಾವಣಾ ಆಯೋಗ ಬೃ.ಬೆಂ.ಮ.ಪಾ.ಅನ್ನು ಚುನಾವಣಾ ಜಿಲ್ಲೆ ಎಂದು ಪರಿಗಣಿಸಿದೆ.)
ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ - ರಾಮನಗರ ಮಾರುಕಟ್ಟೆ, ರಾಮನಗರ
ಅತಿ ದೊಡ್ಡ ಜಿಲ್ಲೆ -
ಅತಿ ಹೆಚ್ಚು ಜನಸಾಂದ್ರೆತೆ ಹೊಂದಿರುವ ಜಿಲ್ಲೆ - ಬೆಂಗಳೂರು ನಗರ
ಅತಿ ಜನಸಂಖ್ಯೆ ಹೊಂದಿರುವ ನಗರ / ಜಿಲ್ಲೆ - ಬೆಂಗಳೂರು ನಗರ
ಅತಿ ಹೆಚ್ಚು ಅನಕ್ಷರತೆ ಹೊಂದಿರುವ ಜಿಲ್ಲೆ - ರಾಯಚೂರು
ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ - ಉತ್ತರ ಕನ್ನಡ ( 814.5 ಹೆಕ್ಟೇರು )
ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ - ಆಗುಂಬೆ
(ದೇಶದ 2ನೇ ಅತಿ ಹೆಚ್ಚು)
ಅತಿ ಚಿಕ್ಕ ಜಿಲ್ಲೆ - ಬೆಂಗಳೂರು ನಗರ ಜಿಲ್ಲೆ
ಅತಿ ಕಡಿಮೆ ಜನಸಾಂದ್ರೆತೆ ಹೊಂದಿರುವ ಜಿಲ್ಲೆ - ಉತ್ತರ ಕನ್ನಡ (131.5)
ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಜಿಲ್ಲೆ - ಕೊಡಗು
ಅತಿ ಚಿಕ್ಕ ವಿಧಾನಸಭಾ ಕ್ಷೇತ್ರ -
ಅತಿ ಚಿಕ್ಕ ಲೋಕಸಭಾ ಕ್ಷೇತ್ರ -
ಅತಿ ಕಡಿಮೆ ಮತದಾರರನ್ನು ಹೊಂದಿರುವ ಜಿಲ್ಲೆ - ಉಡುಪಿ : ಚಿಕ್ಕಮಗಳೂರು
ಅತಿ ಕಡಿಮೆ ಮಳೆ ಪಡೆಯುವ ಪ್ರದೇಶ - ಚಳ್ಳಕೆರೆ
ಕರ್ನಾಟಕದ ' ವಂದೇ ಮಾತರಂ '
ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು
ಬದುಕು ಬಲುಹಿನ ನಿಧಿಯ ಸಭಿಮಾನದ ಗೂಡು ||ಪ||
ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು
ಲೆಕ್ಕಿಗ ಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು
ಪಾವನೆಯರ ಕೃಷ್ಣ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು
- ಹುಯಿಲಗೋಳ ನಾರಾಯಣರಾಯರು
ಕರ್ನಾಟಕದ ರೈತಗೀತೆ
- ರಚನೆ : ಕುವೆಂಪು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ